ಸಮಗ್ರ ವ್ಯಸನ ಮುಕ್ತಿ ಹಾಗು ಪುನರ್ವಸತಿ ಕೇಂದ್ರ - ಕೊಪ್ಪಳ

ಪರಿಕಲ್ಪನೆ :

ನುಡಿದರೆ ಮುತ್ತಿನ ಹಾರದಂತಿರಬೇಕು. ಕುಡಿದರೆ ಮತ್ತೇರುವಂತಿರಬೇಕು ಎಂಬ ನಾಣ್ಣುಡಿಯಂತೆ ಈ ಆಧುನಿಕ ಯುಗದಲ್ಲಿ ಕಾಲದ ಪ್ರಜ್ಞೆ ಇಲ್ಲದವರಿಗೆ ಗಡಿಯಾರ ಬರೀ ಅಲಂಕಾರಕ್ಕಷ್ಟೇ ಎಂಬಂತೆ 84 ಲಕ್ಷ ಜೀವರಾಶಿಗಳಲ್ಲಿ ಸುಜ್ಞಾನ ಮತ್ತು ವಿವೇಕ ಹೊಂದಿರುವ ಮಾನವ ಇಂದು ಮಾದಕ ವಸ್ತುಗಳ ಸೇವನೆ, ಧೂಮಪಾನ ಹಾಗೂ ಮಧ್ಯಪಾನ ಸೇವನೆಯು ಫ್ಯಾಷನ್, ಅಂತಸ್ತು ಹಾಗೂ ಪ್ರತಿಷ್ಠೆಯೆಂದು ಭಾವಿಸಿ ತಮ್ಮ ಜೀವನ ಮತ್ತು ಜೀವವನ್ನು ನಶ್ವರವಾಗಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ನೈತಿಕವಾಗಿ ಅಧಃಪತನದ ಕಡೆಗೆ ಸಾಗುವ ನಾಗರೀಕರಿಗೆ, ವಿಶೇಷವಾಗಿ ಯುವಕರಿಗೆ ಸದರಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯಕರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಆಪ್ತ ಸಮಾಲೋಚನೆ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಲು ಜಾಗೃತಿ ಮೂಡಿಸಿ ಕುಟುಂಬದೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮದ ಅಂಗಸಂಸ್ಥೆಯೇ “ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ.“

ಗುರಿ ಮತ್ತು ಉದ್ದೇಶಗಳು :
  • ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂಬ ಪುರಂದರದಾಸರ ವಾಣಿಯಂತೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
  • ಕ್ಷುಲ್ಲಕ, ಕ್ಷಣಿಕ ಸಂತೋಷಕ್ಕಾಗಿ ಚಟಗಳಿಗೆ ದಾಸರಾಗುವುದನ್ನು ನಿಯಂತ್ರಿಸುವುದು..
  • ಮಧ್ಯವರ್ಜನ ಶಿಬಿರಗಳ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವುದು..
  • ಮಾದಕ ಹಾಗೂ ಮಧ್ಯಪಾನ ಸೇವನೆಯಿಂದ ಉಂಟಾಗುವ ಹೃದ್ರೋಗ, ನರಗಳ ದೌರ್ಬಲ್ಯ, ಮತಿಭ್ರಮಣೆ, ಕಣ್ಣಿನ ತೊಂದರೆ, ಸ್ಮರಣಶಕ್ತಿ ಕುಂದುವುದು, ದೈಹಿಕ ಸೆಳೆತ(ನಡುಕ) ನಿದ್ರಾಹೀನತೆ ಇತ್ಯಾದಿ ಪರಿಣಾಮಗಳ ಕುರಿತು ತಿಳುವಳಿಕೆ ನೀಡುವುದು..
ಆಯ್ಕೆ ಪ್ರಕ್ರಿಯೆ :

ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವ್ಯಸನಿಯನ್ನು ವೈಯಕ್ತಿಕ ಹಾಗೂ ಕೌಟುಂಬಿಕ ಸಮಾಲೋಚನೆ ಮಾಡಿ, ವ್ಯಸನಿಯ ಸ್ವಇಚ್ಛೆಗೆ ಅನುಗುಣವಾಗಿ, ವೈದ್ಯರ ತಪಾಸಣೆಯ ಆಧಾರದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಒಂದು ವೇಳೆ ವ್ಯಸನಿಯು ಚಿಕಿತ್ಸೆಗೆ ನಿರಾಕರಿಸಿದರೆ ಮನವೊಲಿಸಿ ದಾಖಲಿಸಿಕೊಳ್ಳಲಾಗುವುದು.

ದಾಖಲಾತಿಗಳ ಮೂಲಗಳು :
  • ಕುಟುಂಬ ವರ್ಗದವರಿಂದ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜ ಸೇವಕರಿಂದ
  • ಆರಕ್ಷಕ ಠಾಣೆ, ಸಾಂತ್ವನ ಕೇಂದ್ರಗಳು ಹಾಗೂ ವ್ಯಸನಮುಕ್ತಿ ಹೊಂದಿದ ವ್ಯಸನಿಗಳಿಂದ.
ಸೌಲಭ್ಯಗಳು :
  • ಉತ್ತಮ ವಸತಿ ಮತ್ತು ಆಹಾರ, ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ
  • ಆಪ್ತ ಸಮಾಲೋಚನೆ ಹಾಗೂ ಕುಟುಂಬದೊಂದಿಗೆ ಸಂವಾದ ಮತ್ತು ಗುಂಪು ಚರ್ಚೆ.
  • ಮೌಲ್ಯಶಿಕ್ಷಣ, ವ್ಯಕ್ತಿತ್ವ ವಿಕಸನ, ಯೋಗ ಮತ್ತು ಧ್ಯಾನ.
  • ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಸೋಲು, ಅನಾಸಕ್ತಿ ಹೊಂದಿದ ಸಂದರ್ಭದಲ್ಲಿ ಮನಸ್ಸಿನ ನಿಯಂತ್ರಣದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಮಾಹಿತಿ ಹಾಗೂ ಮಾರ್ಗದರ್ಶನ.
  • ಉಪನ್ಯಾಸ ಕಾರ್ಯಕ್ರಮ-ಕಾರ್ಯಗಾರ-ಮನರಂಜನಾ ಕಾರ್ಯಕ್ರಮಗಳು, ಆಟೋಟಗಳು ಹಾಗೂ ಗ್ರಂಥಾಲಯದ ವ್ಯವಸ್ಥೆ.

ಸಮಗ್ರ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರ, ಕೊಪ್ಪಳ

ಕರ್ನಾಟಕ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯು ಒಂದು ಬರಪೀಡಿತ ಪ್ರದೇಶವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯೆಂದೇ ಪರಿಗಣಿತವಾಗಿದೆ. ಇಲ್ಲಿಯ ಜನರು ಕೈಗಾರಿಕಾ ಕೆಲಸಗಳಿಗೆ ಹೋಗುವುದೇ ಹೆಚ್ಚು. ಇಲ್ಲಿಯ ಸುತ್ತಲಿನ ಪ್ರದೇಶಗಳಲ್ಲಿ ಗಣಿಗಾರಿಕೆಯ ಕೈಗಾರಿಕೆಗಳು ಹೆಚ್ಚಾಗಿದ್ದು, ದೈಹಿಕವಾಗಿ ಶ್ರಮಪಡುವ ಕೆಲಸಗಳೇ ಜಾಸ್ತಿ. ಈ ಆಯಾಸವನ್ನು ನೀಗಿಸಲು ಜನರು ಮದ್ಯಸೇವನೆ ಹಾಗೂ ಮಾದಕ ವಸ್ತುಗಳ ಸೇವನೆಗೆ ದಾಸರಾಗುತ್ತಿದ್ದಾರೆ. ಇವುಗಳ ಪರಿಹಾರಾರ್ಥವಾಗಿ ಸುರಭಿ ಸಂಸ್ಥೆಯು 2006ರಲ್ಲಿ ಸಮಗ್ರ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರವನ್ನು ಕೊಪ್ಪಳದ ಭಾಗ್ಯ ನಗರದಲ್ಲಿ ಪ್ರಾರಂಭಿಸಿ ಈವರೆಗೆ ನಡೆಸಿಕೊಂಡು ಬಂದಿದ್ದು ಸುಮಾರು 2255 ಜನ ವ್ಯಸನಿಗಳಿಗೆ ವ್ಯಸನಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ.

ಕೇಂದ್ರದಲ್ಲಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಗಳ ಬಗ್ಗೆ ತರಬೇತಿ ಹೊಂದಿದ ಅನುಭವವುಳ್ಳ ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರದಲ್ಲಿ ದಾಖಲಾಗುವ ವ್ಯಸನಿಗಳು ಎಷ್ಟೇ ತೊಂದರೆ ಕೊಟ್ಟರು ಅದನ್ನು ಗಮನಕ್ಕೆ ತೆಗೆದುಕೊಳ್ಳದೇ ನಿಭಾಯಿಸಿ, ಸಂಯಮದಿಂದ ಅವರನ್ನು ತಿದ್ದುವ ಕೆಲಸವನ್ನು ಮಾಡುವವರಾಗಿದ್ದಾರೆ. ಈ ಕೇಂದ್ರದಲ್ಲಿ ವ್ಯವಸನಿಗಳನ್ನು 24 ಘಿ 7 ಕಾಲವು ದಾಖಲೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳನ್ನು ಕಾಣಬಹುದಾಗಿದೆ.

ಕೇಂದ್ರದಲ್ಲಿ ಜನರು ಯಾವ ರೀತಿ ಒತ್ತಡಗಳಿಗೆ ಸಿಲುಕಿ ಮದ್ಯ ಸೇವನೆ ಮತ್ತು ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಾರೆ ಮತ್ತು ಒತ್ತಡಗಳ ನಿರ್ವಹಣೆ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ತಿಳುವಳಿಕೆ ಮತ್ತು ಮಾರ್ಗದರ್ಶನ ನೀಡುವುದರ ಜೊತೆಗೆ ಸಮಾಜದ ದೃಷ್ಟಿಯಲ್ಲಿ ಕೀಳು ಭಾವನೆಯಿಂದ ಕಾಣುವ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಕ್ರಮಿಸಬೇಕಾದ ಮಾರ್ಗದರ್ಶನ ನೀಡುವುದನ್ನು ಕಾಣಬಹುದಾಗಿದೆ.

ಎಂ.ಎಸ್.ಡಬ್ಲ್ಯೂ.ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದ ನಿಮಿತ್ತ (ಫಿಲ್ಡ್ ವರ್ಕ್) ಕೇಂದ್ರಕ್ಕೆ ಭೇಟಿ ನೀಡಿ ಮದ್ಯ ವ್ಯಸನಿಗಳ ಸ್ಥಿತಿಗತಿ, ಚಿಕಿತ್ಸೆಗಳ ಹಾಗೂ ಪುನರ್ವಸತಿ ಕಾರ್ಯಕ್ಷೇತ್ರಗಳ ಮಾಹಿತಿಯನ್ನು ಪಡೆಯುವ ಸಮಯದಲ್ಲಿ ಸಿಬ್ಬಂದಿಯೊಂದಿಗೆ ಸಂವಹನ ಕಾರ್ಯದಲ್ಲಿ ತೊಡಗಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಯಶೋಗಾಥೆ: ಮನಸ್ಸಿದ್ದರೆ ಮಾರ್ಗ

ಸಂಗಪ್ಪ ಬಿಜವಾಡಗಿ ಸಾ.ಶಿವನಗುತ್ತಿ ಆದ ನಾನು ಬಾಲ್ಯದಲ್ಲಿ ತುಂಬಾ ಒಳ್ಳೆಯವನಾಗಿದ್ದೆ. ತಂದೆ ತಾಯಿ ಕುಟುಂಬದವರೊಂದಿಗೆ ಸರಳ ಜೀವಿಯಾಗಿದ್ದೆ. ತದನಂತರ ನನಗೆ ವಿವಾಹವಾಯಿತು. ದಾಂಪತ್ಯ ಜೀವನದಲ್ಲಿ ಚೆನ್ನಾಗಿ ಕುಟುಂಬವನ್ನು ನಡೆಸಿಕೊಂಡು ಜೀವನವನ್ನು ಸಾಗಿಸುತ್ತಿದ್ದೆ. ನಾನು ಜಿಮ್ ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡೆ. ಆ ಜಿಮ್ ಕಂಪನಿಯಲ್ಲಿ ಗೆಳೆಂiÀiರ ಸಹವಾಸದಿಂದ ನಾನು ಮದ್ಯಪಾನ ಸೇವನೆ ಮಾಡಲು ತೊಡಗಿದೆನು. ಈ ಚಟ ದಿನದಿಂದ ದಿನಕ್ಕೆ ಅತಿಯಾಗ ತೊಡಗಿತು. ಇದರಿಂದ ನನಗೆ ತುಂಬಾನೆ ಕಷ್ಟವಾಯಿತು. ಕುಡಿತದ ಚಟದಿಂದಾಗಿ ಕುಟುಂಬದ ಎಲ್ಲಾ ಬಳUದವರನ್ನು ದೂರಮಾಡಿಕೊಂಡ ನನ್ನನ್ನು ಹೆಂಡತಿ ಮಕ್ಕಳೂ ಸಹ ದ್ವೆಷ ಮಾಡತೊಡಗಿದರು. ಮದ್ಯಸೇವನೆಯಿಂದ ನನ್ನ ಆರೋಗ್ಯ ಸಂಪೂರ್ಣವಾಗಿ ಹಾಳಾಯಿತು. ಕುಟುಂಬದ ಸಂತೋಷ ನೆಮ್ಮದಿಯನ್ನು ಹಾಳು ಮಾಡಿದ ನಾನು ಕುಟುಂಬದಿಂದ ತಿರಸ್ಕøತನಾದೆನು. ಇದರಿಂದ ಜೀವನದಲ್ಲಿ ತುಂಬಾ ನೊಂದುಕೊಂಡು ಜೀವನವೇ ಬೇಡವೆನಿಸಿತು.

ಹಿಗಿರುವಾಗ ನನ್ನನ್ನು ಗೆಳೆಯರ ಸಹವಾಸದಿಂದ ದೂರವಿಟ್ಟು ಮದ್ಯಸೇವನೆ ಬಿಡಿಸಲು ಪ್ರಯತ್ನಮಾಡಿ ಕೊಪ್ಪಳದಲ್ಲಿರುವ ಸುರಭೀ ವ್ಯಸನ ಮುಕ್ತಿ ಕೇಂದ್ರಕ್ಕೆ ತಂದು ದಾಖಲಿಸಲಾಯಿತು. ಕೇಂದ್ರದಲ್ಲಿ ನಾನು ಒಂದು ತಿಂಗಳಕಾಲ ಸಂಪೂರ್ಣವಾಗಿ ಚಿಕಿತ್ಸೆ ಪಡೆದು ವ್ಯಸನಿ ಮುಕ್ತನಾಗಿದ್ದೇನೆ. ಸುರಭೀ ವ್ಯಸನ ಮುಕ್ತಿ ಕೇಂದ್ರದ ಬಗ್ಗೆ ಹೇಳುವುದಾದರೆ ನನಗೆ ವರ್ಣಿಸಲು ಸಾಧ್ಯವಿಲ್ಲ. ಕೇಂದ್ರದಲ್ಲಿ ನನಗೆ ತುಂಬಾನೆ ತಿಳುವಳಿಕೆ ನೀಡಿರುತ್ತಾರೆ. ಒಡೆದು ಹೋಗಿದ್ದ ಕುಟುಂಬವನ್ನು ಒಂದುಗೂಡಿಸಿದ ಹಾಗೂ ನನ್ನನ್ನು ನಶಮುಕ್ತನಾಗಿಸಿದ ಕೇಂದ್ರದ ಕೆಲಸಕ್ಕೆ ನನ್ನ ವಂದನೆಗಳು.

ಈಗ ಸುಮಾರು ಎರಡು ಮೂರು ವರ್ಷಗಳಿಂದÀ ನಶಮುಕ್ತನಾಗಿದ್ದೆನೆ. ನನಗೆ ಪುರ್ನಜೀವನ ಕೊಟ್ಟ ಸುರಭೀ ವ್ಯಸನ ಮುಕ್ತಿ ಕೇಂದ್ರಕ್ಕೆ ಯಾವತ್ತು ಚಿರಋಣಿಯಾಗಿರುತ್ತೇನೆ. ಸುರಭೀ ವ್ಯಸನಮುಕ್ತ ಕೇಂದ್ರದ ಸಿಬ್ಬಂದಿಯು ನನಗೆ ಜೀವನವೆಂದರೇನು ಎಂಬುದನ್ನು ತಿಳಿಸಿ ನನ್ನ ಕುಟುಂಬವನ್ನು ಚನ್ನಾಗಿ ನಡೆಸಿಕೊಂಡು ಹೋಗಲು ಆತ್ಮ ಸ್ಥೈರ್ಯ ತುಂಬಿರುತ್ತಾರೆ. ನಾನು ಈ ದಿನಮಾನಗಳಲ್ಲಿ ತುಂಬಾ ಸಂತೋಷವಾಗಿ ಜೀವನ ನಡೆಸುತ್ತಿದ್ದೇನೆ. ಇದಕ್ಕೆ ಕಾರಣೀಕರ್ತರಾದ ಸುರಭೀ ಸಮಗ್ರ ವ್ಯಸನಮುಕ್ತ ಹಾಗೂ ಪುನರ್ವಸತಿ ಕೇಂದ್ರದ ಸಿಬ್ಬಂದಿ ಹಾಗೂ ಸಂಸ್ಥಾಪಕರಿಗೆ ನನ್ನ ಹೃದಯಪೂರ್ವಕ ಕೃತಜÐತೆಯನ್ನು ಈ ಮೂಲಕ ತಿಳಿಸುತ್ತಿದ್ದೇನೆ.

ಸಂಗಪ್ಪ ಬೀಜವಾಡಗಿ





ಅಭಿಪ್ರಾಯ :

ಸುರಭಿ ಸಂಸ್ಥೆಯ ಮಧ್ಯವ್ಯಸನ ಮುಕ್ತಿ ಕೇಂದ್ರ ಕೊಪ್ಪಳ ಇಲ್ಲಿಗೆ ಬೇಟಿ ನೀಡಿ, ಸಂಸ್ಥೆಯು ಅನುಷ್ಟಾನಗೊಳಿಸುತ್ತಿರುವ ಯೋಜನೆಗಳು, ಸಮಾಜಮುಖಿ ಕಾರ್ಯಕ್ರಮಗಳೆಂದು ತಿಳಿದು ತುಂಬಾ ಸಂತೋಷವಾಯಿತು. ನಮ್ಮ ದೇಶದಲ್ಲಿ ಸಾಮಜಿಕ ಸಮಸ್ಸೆಗಳಲ್ಲಿ ಮಧ್ಯಪಾನ ಒಂದು ದೋಡ್ಡ ಸಮಸ್ಸೆಯಾಗಿ ಪರಿಣಮಿಸಿದೆ. ಅಂತಹ ಚಟಗಳಿಗೆ ಬಲಿಯಾಗಿ ಅನೇಕ ಜನರು ತಮ್ಮ ಜೀವನವನ್ನು ಹಾಳುಮಾಡಿ ಕೊಳ್ಳುತ್ತಿದ್ದಾರೆ. ಈ ಸಂಸ್ಥೆಯು ಇಲ್ಲಿಗೆ ಬರುವ ಮಧ್ಯವ್ಯಸನಿಗಳಿಗೆ ಚಿಕಿತ್ಸೆ ವದಗಿಸುವುದರ ಜೊತೆಗೆ ಊಟ, ವಸತಿ, ಹಾಗೂ ಆಪ್ತಸಮಾಲೊಚನೆ ಮಾಡಿ ಮಾದಕ ವಸ್ತುಗಳ ಸೇವನೆಯಿಂದ ಮುಕ್ತರನ್ನಾಗಿಸುವ ಕಾರ್ಯದಲ್ಲಿ ಮಾರ್ಗದರ್ಶನ ನೀಡಿ ನೇರವಾಗುವುದು ಹಾಗೂ ಅವರನ್ನು ಪುನಃ ಅವರ ಕುಟುಂಬದ ಜೊತೆ ಸೇರಿಸುವ ಕೆಲಸಗಳನ್ನು ತಿಳಿದ ನಮಗೆ ತುಂಬ ಸಂತೋಷವಾಯಿತು. ಇಲ್ಲಿಯ ವ್ಯಸನಿಗಳ ಜೊತೆ ಸಂಬಾಷಿಸಿದಾಗ ಅವರಿಂದಲೂ ಉತ್ತಮ ಪ್ರತಿಕ್ರೀಯೇ ಬಂದದ್ದು ಹರ್ಷದಾಯಕ ವಿಷಯ. ಸಂಸ್ಥೆಗೆ ಒಳ್ಳೆಯದಾಗಲೆಂದು ಹಾರೈಸುತ್ತೇನೆ. ಅನ್ನದಾನ ಬಾರತಿ ಅಪ್ಪಣ್ಣ ಸ್ವಾಮಿಗಳು,

ಚಿಕ್ಕೇನಕೊಪ್ಪ, ತಂಗಡಗಿ