ರಾಜೀವಗಾಂಧಿ ರಾಷ್ಟ್ರೀಯಾ ಶಿಶುಪಾಲನಾ ಯೋಜನೆ – ದುಡಿಯುವ ಮಹಿಳೆಯರ ಮಕ್ಕಳಿಗಾಗಿ ದಿನದ ಆರೈಕೆ ಕೇಂದ್ರ - ಶಿವಮೊಗ್ಗ

ಪರಿಕಲ್ಪನೆ :

ಆಧುನಿಕ ಯುಗದಲ್ಲಿ ಸಾಮಾಜಿಕ ಸಮಸ್ಯೆಗಳು, ಸವಾಲುಗಳು ಹಾಗೂ ಕೌಟುಂಬಿಕ ತಲ್ಲಣಗಳು ದಿನೇ ದಿನೇ ಹೆಚ್ಚುತ್ತಾ ನಗರಗಳಲ್ಲಿನ ಕೊಳಚೆ ಪ್ರದೇಶಗಳಲ್ಲಿ ಜೀವನ ನಡೆಸುವ ಕುಟುಂಬಗಳ ತಾಯಂದಿರು ತಮ್ಮ ಕುಟುಂಬದ ನಿರ್ವಹಣೆಗಾಗಿ ಹೊರಗಿನ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವವರೆಗೆ 0-3 ವರ್ಷ ವಯಸ್ಸಿನ ಮಕ್ಕಳನ್ನು ಒಂದು ನಿರ್ದಿಷ್ಠ ಕೇಂದ್ರದಲ್ಲಿ ಬಿಟ್ಟು ಹೋದ ಅವಧಿಯಲ್ಲಿ ಮಕ್ಕಳ ಪಾಲನೆ, ಪೋಷಣೆ ಹಾಗೂ ರಕ್ಷಣೆ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸುವ ಸಂಸ್ಥೆಯೇ“”ರಾಜೀವ್ ಗಾಂಧಿ ಶಿಶುಪಾಲನ ಕೇಂದ್ರ”’’.

ಗುರಿ ಮತ್ತು ಉದ್ದೇಶ :
  • ಔಪಚಾರಿಕೆ ಶಿಕ್ಷಣ ಮೂಲಕ ಕಲಿಕೆಗೆ ಅವಕಾಶ ಹೆಚ್ಚಿಸುವುದು.
  • ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುವುದು ಹಾಗೂ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು.
  • ಪೋಷಕರು ನಿರಾಳವಾಗಿ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಿ ಅವರವರ ಕೆಲಸಕ್ಕೆ ತೆರಳುವಂತೆ ಪ್ರೋತ್ಸಾಹಿಸುವುದು.
  • ಅನಕ್ಷರತೆ ಹೆಚ್ಚಿರುವಂತಹ ಪ್ರದೇಶಗಳ ಮಕ್ಕಳಿಗೆ ಙËಪಚಾರಿಕ ಶಿಕ್ಷಣ ನೀಡುವುದು
  • ಕೌಟುಂಬಿಕ ಸಮಸ್ಸೆಗಳಿಂದ ಕುಗ್ಗಿಹೊದ ಕುಟುಂಬಗಳಿಗೆ ಆಧಾರವಾಗಿ ಹೊರಗಿನ ಕೆಲಸಕ್ಕೆ ಹೋಗುವ ತಾಯಂದಿರಿಗೆ ಅನುಕೂಲವಾಗುವ ಉದ್ದೇಶ.
ಅರ್ಹ ಫಲಾನುಭವಿಗಳು :
  • ಕೂಲಿ ಕಾರ್ಮಿಕರ, ಕೊಳಚೆ ನಿವಾಸಿಗಳ ಮತ್ತು ಅಸಂಘಟಿತ ಕಾರ್ಮಿಕ ಉದ್ಯೋಗಸ್ಥ ಮಹಿಳೆಯರ ಮಕ್ಕಳು.
  • 03-06 ವರ್ಷದ ಮಕ್ಕಳು.
ಸೌಲಭ್ಯಗಳು :
  • ಮಕ್ಕಳ ವಯಸ್ಸಿಗನುಗುಣವಾಗಿ ತೊಟ್ಟಿಲಿನಲ್ಲಿ ತೂಗಿ ಮಲಗಿಸುವ ಕೆಲಸ.
  • ಬೆಳಗಿನ ಉಪಹಾರ, ಮಧ್ಯಾಹ್ನದ ಪೌಷ್ಠಿಕ ಆಹಾರ ಹಾಗೂ ಪೌಷ್ಠಿಕಾಂಶಗಳುಳ್ಳ ಮೊಳಕೆಕಾಳು, ಹಣ್ಣು ಇತ್ಯಾದಿ.
  • ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವುದರ ಜೋತೆಗೆ ಕ್ರೀಡೆ ಹಾಗೂ ಮನೋರಂಜನೆ ಒದಗಿಸುವುದು.
  • ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರ ಮೂಲಕ ಮಕ್ಕಳು ಆರೋಗ್ಯದಂದಿರುವಂತೆ ಗಮನ ಹರಿಸುವುದು.

ರಾಜೀವಗಾಂಧಿ ಶಿಶುಪಾಲನಾ ಕೇಂದ್ರ - ಶಿವಮೊಗ್ಗ.

ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳ ಸಾಮರಸ್ಯದ ಕೊರತೆ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಕುಟುಂಬದಿಂದ ಹೊರ ಬಂದು, ತಮ್ಮ ಜೀವನ ನಿರ್ವಹಣೆಗಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿ, ಅಲ್ಲಿಯ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಕುಟುಂಬಗಳ ಮಹಿಳೆಯರು ತಮ್ಮ ಜೀವನ ನಿರ್ವಹಣೆಗಾಗಿ ಹೊರಗಿನ ಕೆಲಸಕ್ಕಾಗಿ ಹೋಗಿ ಬರುವ ಅನಿವಾರ್ಯತೆ ಇರುತ್ತದೆ. ದಿನದ ಹಗಲೆಲ್ಲ ಕೆಲಸ ಮಾಡಿ ಮನೆಗೆ ವಾಪಸ್ ಬರುª ವರೆಗಿನ ಅವಧಿಯಲ್ಲಿ ಮೂಲಭೂತ ಸೌಕರ್ಯ ವಂಚಿತ ಅವರ ಮಕ್ಕಳ ಪಾಲನೆ, ಪೋಷಣೆ ಜೊತೆಗೆ ಪೌಷ್ಠಿಕಾಂಶ ಆಹಾರ, ಔಪಚಾರಿಕ ಶಿಕ್ಷಣ ಹಾಗೂ ಆಟೋಟಗಳನ್ನು ಆಡಿಸುವುದರ ಮೂಲಕ ಮಕ್ಕಳನ್ನು ಮನರಂಜಿಸುವ “ರಾಜೀವ್‍ಗಾಂಧಿ ಶಿಶುಪಾಲನಾ ಕೇಂದ್ರ’’ ವು ಮಲೆನಾಡಿನ ಹೆಬ್ಬಾಗಿಲೆಂದೇ ಹೆಸರು ಪಡೆದಿರುವ ಶಿವಮೊಗ್ಗ ನಗರದಲ್ಲಿ 2006-07ರಲ್ಲಿ ಪ್ರಾರಂಭವಾಗಿ ಈ ವರೆಗೆ 2655 ಮಕ್ಕಳನ್ನು ಪಾಲನೆಮಾಡಿ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿರುತ್ತದೆ.

ಈ ಕೇಂದ್ರದಲ್ಲಿ ನುರಿತ, ಅನುಭವಿ ಹಾಗೂ ನಿಸ್ವಾರ್ಥ ಸೇವಾ ಮನೋಭಾವವುಳ್ಳ ಹಾಗೂ ಈ ಯೋಜನೆಗೆ ಒಳಪಡುವ ಮತ್ತು ಕೇಂದ್ರಕ್ಕೆ ಬರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಿ ಪಾಲನೆ ಮಾಡುವ ಪ್ರಾಮಾಣಿಕ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಅಕ್ಷರಾಭ್ಯಾಸ, ಓದು ಬರಹ ಮಾಡಿಸಿದರೆ ಹಂತ ಹಂತವಾಗಿ ಮಕ್ಕಳು ಬೆಳವಣಿಗೆ ಹೊಂದುತ್ತಾರೆ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ವೇದವಾಕ್ಯ ಇದೆಯಾದರೂ ಆಧುನಿಕ ಯುಗದಲ್ಲಿ ಕೆಲಸದ ಒತ್ತಡದಲ್ಲಿ ಸಿಲುಕಿದ ಮಹಿಳೆಯರು ತಮ್ಮ ಮಕ್ಕಳಿಗೆ ಮನೆಯಲ್ಲಿ ಪಾಠಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಈ ಸಮಸ್ಯೆಯನ್ನು ಸರಿದೂಗಿಸುವ ಕೆಲಸದಲ್ಲಿ ಕಾರ್ಯನಿರತರಾಗಿರುವ ಕೇಂದ್ರದ ಶಿಕ್ಷಕಿಯರು ಅಕ್ಷರಾಭ್ಯಾಸ ಮಾಡಿಸುತ್ತಿರುವುದು.

ಯಶೋಗಾಥೆ : ಲಾಲನೆಯ ಗೂಡು, ಚೆಂದದ ಬೀಡು

ನನ್ನ ಹೆಸರು ಲಲಿತಮ್ಮ. ನಾನು ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಸುತ್ತಿದ್ದೇನೆ. ನನ್ನ ಪತಿಯೂ ಕೂಲಿ ಕೆಲಸ ಮಾಡುತ್ತಿದ್ದಾರೆ. ನಾವು ತುಂಬಾ ಬಡವರಿದ್ದು, ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿರುತ್ತದೆ. ಮನೆಯಲ್ಲಿ ನನ್ನ ಪತಿ, ನಾನು ಹಾಗೂ ನನ್ನ ಮಗಳು ಬಿಟ್ಟರೆ ಬೇರೆ ಯಾರು ಇರುವುದಿಲ್ಲ. ನಾವು ಕೂಲಿ ಕೆಲಸಕ್ಕೆ ಹೋದಾಗ ನನ್ನ ಮಗಳನ್ನು ನೋಡಿಕೊಳ್ಳುವವರು ಯಾರು ಇರುತ್ತಿರಲಿಲ್ಲ. ಕೆಲಸಕ್ಕೆ ಹೋದ ಸ್ಥಳದಲ್ಲೆ ಜೋಲಿಕಟ್ಟಿ ಮಗಳನ್ನು ನೋಡಿಕೊಳ್ಳುತ್ತಿದ್ದೆ. ಆದರೆ ಅಲ್ಲಿ ಸ್ವಚ್ಚತೆ ಇರಲಿಲ್ಲ. ಅಲ್ಲದೇ ಮಗುವಿಗೆ ನಿದ್ದೆ ಕೂಡ ಸರಿಯಾಗಿ ಬರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಸುರಭಿ ಶಿಶುಪಾಲನಾ ಕೇಂದ್ರದ ಪರಿಚಯವಾಗಿ ನನ್ನ ಮಗಳಾದ ಹರ್ಷಿಣಿಯನ್ನು ಕೇಂದ್ರಕ್ಕೆ ದಾಖಲಿಸಿದೆ. ಅಲ್ಲಿ ನನ್ನ ಮಗುವಿಗೆ ಸಮಯಕ್ಕೆ ಸರಿಯಾಗಿ ಹಾಲು, ಊಟ, ಮೊಳಕೆ ಕಾಳುಗಳು, ಪಾಯಸ ನೀಡುತ್ತಾರೆ. ಅಲ್ಲಿನ ಶಿಕ್ಷಕಿಯರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಸುರಕ್ಷಿತವಾಗಿರುತ್ತಾರೆಂದು ನಾವು ನೆಮ್ಮದಿಯಿಂದ ಇದ್ದೇವೆ. ಹಾಗೇಯೇ ಶಿಶುಪಾಲನಾ ಕೇಂದ್ರಗಳಲ್ಲಿ ಆಟಿಕೆ ಸಾಮಾನುಗಳಿದ್ದು, ನನ್ನ ಮಗು ಅಲ್ಲಿ ಸಂತೋಷವಾಗಿರುವುದನ್ನು ನೋಡಿ ನಾವು ಖುಷಿಯಾಗಿದ್ದೇವೆ. ಕೂಲಿ ಕಾರ್ಮಿಕರ ಮಕ್ಕಳಿಗೆ ಇಂತಹ ಶಿಶುಪಾಲನಾ ಕೇಂದ್ರಗಳು ಅನುಕೂಲವಾಗಿದ್ದು, ಇನ್ನೂ ಹೆಚ್ಚಿನ ಪ್ರಗತಿಯಲ್ಲಿ ಮುಂದುವರೆಯಲಿ ಎಂದು ಆಶಿಸುತ್ತೇನೆ.

ಲಲಿತಮ್ಮ
ರಾಗಿಗುಡ್ಡ, ಶಿವಮೊಗ್ಗ.

ಅಭಿಪ್ರಾಯ :

ಸುರಭಿ ಸಂಸ್ಥೆಯ ಶಿಶುಪಾಲನ ಕೇಂದ್ರವು 6 ತಿಂಗಳ ಮಗುವಿನಿಂದ 03 ವರ್ಷದ ಮಗುವಿನ ಪಾಲನೆ, ಪೋಷಣೆ ಮಾಡುತ್ತಿದೆ. ನಮ್ಮಂತಹ ಕೂಲಿ ಕಾರ್ಮಿಕರ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುವವರು ಯಾರು ಇಲ್ಲದೇ ಇದ್ದರೂ ಶಿಶುಪಾಲನಾ ಕೇಂದ್ರಗಳು ಮಕ್ಕಳನ್ನು ನೋಡಿಕೊಳ್ಳಲು ಅನುಕೂಲವಾಗಿವೆ. ಇಲ್ಲಿನ ಕೇಂದ್ರಗಳಲ್ಲಿ ಮಕ್ಕಳಿಗೆ ಊಟ, ಹಣ್ಣು, ಹಾಲು, ಪಾಯಸ ನೀಡುವುದರ ಜೊತೆಗೆ ನಮ್ಮ ಮಕ್ಕಳನ್ನು ಇಲ್ಲಿನ ಸಿಬ್ಬಂದಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುತ್ತಾರೆ. ಈ ಕೇಂದ್ರವು ಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತಹ ಸಂಸ್ಥಯೂ ಬೆಳೆಯಲಿ ಎಂದು ಹಾರೈಸುತ್ತೇನೆ. ದುರ್ಬಲ ಕುಟುಂಬಳಿಗೆ ಈ ಕೇಂದ್ರಗಳು ನೆರವಾಗಲಿ ಹಾಗೂ ಇನ್ನೂ ಹೆಚ್ಚು ವರ್ಷಗಳಕಾಲ ಸಂಸ್ಥೆಯು ಸೇವೆಯನ್ನು ಮುಂದುವರೆಸಿಕೊಂಡು ಹೊಗಲೇಂದು ಶುಭಹಾರೈಸುತ್ತೇನೆ.

ಗೌರಮ್ಮ, ಸ್ಥಳೀಯರು,
ಶಿವಮೊಗ್ಗ